ಡಿ.ಕೆ ಶಿವಕುಮಾರ್ ಅವರ ಹಳೆಯ ವೀಡಿಯೋವನ್ನು ೨೦೨೩ ಕರ್ನಾಟಕ ಚುನಾವಣಾ ಪ್ರಚಾರಾದ ಸಮಯದ್ದು ಎಂದು ತಪ್ಪಾಗಿ ಬಿಂಬಿಸಲಾಗಿದೆ

ಮೂಲಕ: ರಜಿನಿ ಕೆ.ಜಿ
ಜುಲೈ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಡಿ.ಕೆ ಶಿವಕುಮಾರ್ ಅವರ ಹಳೆಯ ವೀಡಿಯೋವನ್ನು ೨೦೨೩ ಕರ್ನಾಟಕ ಚುನಾವಣಾ ಪ್ರಚಾರಾದ ಸಮಯದ್ದು ಎಂದು ತಪ್ಪಾಗಿ ಬಿಂಬಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಶಿವಕುಮಾರ್ ಅವರು ಮದ್ಯದ ಅಮಲಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ೨೦೨೨ ರ ಪಾದಯಾತ್ರೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 808bcd4f

ಸಂಧರ್ಭ

ಮೇ ೧೦ ರಂದು ನಡೆದ ಕರ್ನಾಟಕದ ರಾಜ್ಯ ಚುನಾವಣೆಯ ಮುಂಚಿತವಾಗಿ ಪ್ರಚಾರವು ಪೂರ್ಣ ಪ್ರಮಾಣದಲ್ಲಿ ನೆಡೆಯುತ್ತಿದ್ದ ನಡುವೆ, ತಪ್ಪು ಮಾಹಿತಿಯ ಉಲ್ಬಣವು ಕಂಡುಬಂದಿತು. ವೀಡಿಯೋವೊಂದರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮಿತ್ರಪಕ್ಷಗಳು ಸುತ್ತುವರಿದಿರುವುದು, ಅಸ್ಥಿರವಾಗಿ ನಡೆಯುತ್ತಿರುವುದು ಮತ್ತು ಬಹುತೇಕ ಬಿದ್ದಂತೆ ತೋರುತ್ತದೆ ಮತ್ತು ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಕುಡಿದಿದ್ದರು ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪೋಷ್ಟ್ ನಲ್ಲಿ ಹೇಳಲಾಗಿದೆ.

ಮೇ ೨೦, ೨೦೨೩ ರಂದು ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆದರೆ, ಇದು ಹಳೆಯ ವೀಡಿಯೋವಾಗಿದ್ದು, ತಪ್ಪು ನಿರೂಪಣೆಯೊಂದಿಗೆ ಮರುಕಳಿಸಿದೆ.

ವಾಸ್ತವವಾಗಿ

ವೀಡಿಯೋ ಮೇಲಿನ ಎಡ ಮೂಲೆಯಲ್ಲಿ "ನ್ಯೂಸ್ 1 ಕನ್ನಡ" ಲೋಗೋ ಮತ್ತು ಕೆಳಭಾಗದಲ್ಲಿ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಹೊಂದಿತ್ತು. ೯ ಜನವರಿ ೨೦೨೨ ರಂದು ಸಂಸ್ಥೆಯ ಅಧಿಕೃತ ಯುಟ್ಯೂಬ್ (YouTube) ಖಾತೆಯಿಂದ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆ: "ಡಿಕೆ ಶಿವಕುಮಾರ್: ಸುಸ್ತಾಗಿ ತಟ್ಟಾಡಿದ ಡಿಕೆಶಿ | ಮೇಕೆದಾಟು ಪಾದಯಾತ್ರೆ | ನ್ಯೂಸ್ ಫಸ್ಟ್ ಕನ್ನಡ." ಅಂತೆಯೇ ಜನವರಿ ೧೦ ರಂದು ಇಂಡಿಯಾ ಟುಡೇ ಶಿವಕುಮಾರ್ ಜೊತೆಗಿನ ವಿಶೇಷ ಸಂದರ್ಶನವನ್ನು ಶೀರ್ಷಿಕೆಯಡಿ "ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರ ಪಾದಯಾತ್ರೆಯಲ್ಲಿ ಶೂನ್ಯ ಸಾಮಾಜಿಕ ಅಂತರ? | ಡಿಕೆ ಶಿವಕುಮಾರ್ ಎಕ್ಸ್‌ಕ್ಲೂಸಿವ್." ೭:೨೮ ಮಾರ್ಕ್‌ನಲ್ಲಿ, ನಾವು ವೈರಲ್ ಕ್ಲಿಪ್ ಅನ್ನು ನೋಡಬಹುದು ಹಾಗೂ ಎಡ ಮೂಲೆಯಲ್ಲಿರುವ ಸ್ಥಳದ ಟ್ಯಾಗ್ ಮೇಕೆದಾಟು, ಕರ್ನಾಟಕ ಎಂದು ತೋರುತ್ತದೆ. ಶಿವಕುಮಾರ್ ಅಧಿಕಾರಿಯೊಬ್ಬರಿಗೆ "ನಾನು ಫಿಟ್ ಆ್ಯಂಡ್ ಫೈನ್ ಆಗಿದ್ದೇನೆ. ನೀವು ನನ್ನನ್ನು ಒತ್ತಾಯಿಸಲು ಸಾಧ್ಯವಿಲ್ಲ (ನನ್ನ ಮಾದರಿಯನ್ನು ನೀಡಲು). ನನಗೆ ಈ ದೇಶದ ಕಾನೂನು ಗೊತ್ತು. ನಿಮ್ಮ ಗೃಹ ಸಚಿವರಿಗೆ ಹೇಳಿ ನಾನು ಪರಿಪೂರ್ಣ" ಹೀಗೆ ಹೇಳಿದ್ದಾರೆ ಎಂದು ವಿಡಿಯೋ ವಿವರಣೆಯಲ್ಲಿ ಹೇಳಲಾಗಿದೆ. ಜನವರಿ ೯ ರಂದು ಕಾಂಗ್ರೆಸ್ ೧೬೫ ಕಿಮೀ ಉದ್ದದ ಪಾದಯಾತ್ರೆ ಆರಂಭಿಸಿದ ನಂತರ ಈ ಘಟನೆ ನಡೆದಿದ್ದು. ಶಿವಕುಮಾರ್ ಕೋವಿಡ್-೧೯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ಮನವೊಲಿಸಲು ಶಿವಕುಮಾರ್ ಜನವರಿ ೨೦೨೨ ರಲ್ಲಿ ಪಾದಯಾತ್ರೆಯನ್ನು ಆಯೋಜಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹತ್ತು ದಿನಗಳ ಕಾಲ ೬೦ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳಲು ಯೋಜಿಸಲಾಗಿದ್ದ ಈ ಯಾತ್ರೆಯು ಕೋವಿಡ್-೧೯ ಮಾನದಂಡಗಳಿಗೆ ವಿರುದ್ಧವಾಗಿ ನಡೆದು ವಿವಾದಕ್ಕೆ ಕಾರಣವಾಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದಂತೆ ಶಿವಕುಮಾರ್ ಕುಡಿದಿದ್ದಾರೆಯೇ ಎಂದು ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಮೇಲಿನ ಮೂಲಗಳಿಂದ, ವೀಡಿಯೋ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ತೀರ್ಪು

೨೦೨೨ ರ ಜನವರಿಯಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ನಡೆಸಿದ ಪಾದಯಾತ್ರೆಯ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ, ಅವರು ೨೦೨೩ ರ ಚುನಾವಣೆಗೆ ಮುನ್ನ ಕುಡಿದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.